Thursday, 4 August 2011



ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾರಿದ ಆಲಿಕಲ್ಲು ನೀನು;
ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು,
ಏನೆಂದು ಬಣ್ಣಿಸಲಿ ನಾನು.

ಚುಮು ಚುಮು ಮುಂಜಾವಿನಲಿ, ನಗುತಿದ್ದ ಹಸಿರ ಮೈಮೇಲೆ,
ನಲಿಯುತಿದ್ದ ಬಿಂದುವಿನೊಳಗೆ ನಿನ್ನ ಬಿಂಬ;
ಚಳಿಗೆ ಮುದುಡಿದ ಕೈಯೊಳಿದ್ದ, ಚಹದ ಬಟ್ಟಲಿನಿಂದ ಎದ್ದ
ಹಬೆಯೊಳಗೂ ಮೂಡಿತ್ತು, ನಿನ್ನದೇ ಬಿಂಬ.

ಮೌನ ಹಾದಿಯಲಿ ಒಂಟಿ ಪಯಣಿಗ ನಾನು, ಜೊತೆಯಿರಲು
ನಿನ ಮಾತು, ನನಗಷ್ಟೇ ಸಾಕು;
ದುಃಖದಿ ಮುಳುಗುವ ನನ್ನ ಹೃದಯಕೆ, ಅಮೃತ ಸಿಂಚನ
ನಿನ್ನೀ ನಗುವಿನ ಪಲುಕು.

ಎಂದಿಗೂ ಬತ್ತದ ಪ್ರೇಮದ ಒರತೆಯ ನೀ ಹೊತ್ತು,
ನನ್ನ ಕನಸನು ಸೇರಿಕೋ;
ಭಾವಕೊಳವನು ಕದಡಿದ ಓ ನನ್ನ ಪ್ರೇಮವೇ
ಈ ಪ್ರೇಮವನು ಒಪ್ಪಿಸಿಕೋ.


ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾರಿದ ಆಲಿಕಲ್ಲು ನೀನು;
ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು,
ಏನೆಂದು ಬಣ್ಣಿಸಲಿ ನಾನು.

ಚುಮು ಚುಮು ಮುಂಜಾವಿನಲಿ, ನಗುತಿದ್ದ ಹಸಿರ ಮೈಮೇಲೆ,
ನಲಿಯುತಿದ್ದ ಬಿಂದುವಿನೊಳಗೆ ನಿನ್ನ ಬಿಂಬ;
ಚಳಿಗೆ ಮುದುಡಿದ ಕೈಯೊಳಿದ್ದ, ಚಹದ ಬಟ್ಟಲಿನಿಂದ ಎದ್ದ
ಹಬೆಯೊಳಗೂ ಮೂಡಿತ್ತು, ನಿನ್ನದೇ ಬಿಂಬ.

ಮೌನ ಹಾದಿಯಲಿ ಒಂಟಿ ಪಯಣಿಗ ನಾನು, ಜೊತೆಯಿರಲು
ನಿನ ಮಾತು, ನನಗಷ್ಟೇ ಸಾಕು;
ದುಃಖದಿ ಮುಳುಗುವ ನನ್ನ ಹೃದಯಕೆ, ಅಮೃತ ಸಿಂಚನ
ನಿನ್ನೀ ನಗುವಿನ ಪಲುಕು.

ಎಂದಿಗೂ ಬತ್ತದ ಪ್ರೇಮದ ಒರತೆಯ ನೀ ಹೊತ್ತು,
ನನ್ನ ಕನಸನು ಸೇರಿಕೋ;
ಭಾವಕೊಳವನು ಕದಡಿದ ಓ ನನ್ನ ಪ್ರೇಮವೇ
ಈ ಪ್ರೇಮವನು ಒಪ್ಪಿಸಿಕೋ.


ಜಗತ್ತಿನಲ್ಲಿ ಅತಿ ಭೀಕರವಾದ ಸಾವು
ನಮ್ಮ ಸಾವಲ್ಲ..
ನಮ್ಮ ಆಪ್ತರದ್ದು ಅಲ್ಲ..
ಮನಸ್ಸುಗಳ ನಡುವಿನ ಪ್ರೀತಿಯ ಸಾವು,,,
ನಂಬಿಕೆಯ ಸಾವು...
ಕೊನೆವರೆಗೂ ಭೂತವಾಗಿ
ಕಾಡುತ್ತಲೇ ಇರುತ್ತದೆ....
ಕೊಲ್ಲುವ ಮುನ್ನ ಒಮ್ಮೆ ಯೋಚಿಸು,,,

GIRISH

Nana Manasina Mathu